Monday, May 11, 2009

ಜಗತ್ತಿನ ಪರಮ ಪಾತಕಿಗಳು!

ಇಲ್ಲಿ ನಾನು ಹೇಳಬಯಸಿರುವುದು ಯಾರೋ ಅಪ್ಪಟ ಕ್ರಿಮಿನಲ್ ಗಳ ಕಥೆಯನ್ನಲ್ಲ, ನಾವು ಚಿಕ್ಕವರಿದ್ದಾಗಿನಿಂದಲೇ ನಮಗೆ ಪರಿಚಯವಾಗಿರುವ ಜಗತ್ತಿನ ಮಹಾನ್ ನಾಯಕರು,ಮೇಧಾವಿಗಳು,ಸಾಧಕರ ಬಗ್ಗೆ.ಅವರ ಇನ್ನೊಂದು ಮುಖವನ್ನು ನಮಗೆ ನಮ್ಮ ಸ್ಕೂಲಿನಲ್ಲಿ ಪರಿಚಯಿಸೇ ಇಲ್ಲ,ಅದಕ್ಕಾಗಿ ನನ್ನ ಪ್ರಯತ್ನ.

ರಾಕ್ಷಸ ರೂಪಿ ಹಿಟ್ಲರ್:
ಇಡೀ ಮಾನವ ಜನಾಂಗ ಕಂಡ ಅತ್ಯಂತ ಕ್ರೂರ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವನೇ ಅಡಾಲ್ಫ್ ಹಿಟ್ಲರ್.ಕರುಣೆ,ಮಾನವೀಯತೆ,ಅನುಕಂಪ ಇಂಥ ಪದಗಳ ಪರಿಚಯವೇ ಇಲ್ಲದ ಹಿಟ್ಲರ್,ಇಡೀ ಜಗತ್ತನ್ನೇ ತನ್ನ ನಿರ್ಧಯತೆಯಿಂದ ನಡುಗಿಸಿದವನು.
ಬರೀ ಜರ್ಮನಿಯನ್ನಷ್ಟೇ ಅಲ್ಲದೆ ಇಡೀ ಜಗತ್ತನ್ನೇ ಆಳಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದ ಹಿಟ್ಲರ್ ಪ್ರಪಂಚದ ಮಹಾಯುದ್ಧಗಳಿಗೆ ಕಾರಣನಾದನು.ಇವನು ಸರ್ವಾಧಿಕಾರಿಯಾಗಿ ಜರ್ಮನಿಯಲ್ಲಿ ಆಡಳಿತ ನಡೆಸಿದ್ದು ಕೇವಲ ಹನ್ನೆರಡು ವರ್ಷವಾದರೂ ಹನ್ನೆರಡು ದಶಕಗಳವರೆಗೆ ನೆನಪಿರುವಷ್ಟು ಕ್ರೌರ್ಯ ಎಸಗಿಬಿಟ್ಟ.
ಸಲಿಂಗಕಾಮಿಯು ಆಗಿದ್ದ ಹಿಟ್ಲರ್ ಅದೆಷ್ಟೋ ಜನರನ್ನು ತನ್ನ ವಿಕ್ರತಕ್ಕೆ ಬಳಸಿಕೊಂಡ ನಿದರ್ಶನಳು ಸಿಕ್ಕಿವೆ. ಜಗತ್ತಿನಲ್ಲಿ ಜರ್ಮನ್ನರು ಸರ್ವಶ್ರೇಷ್ಟರು,ಆಳಲು ಎಂದೇ ಹುಟ್ಟಿದವರು ಎಂದು ಬಲವಾಗಿ ಪ್ರತಿಪಾದಿಸುತಿದ್ದ ಹಿಟ್ಲರ್,ಉಳಿದವರೆಲ್ಲ ಜರ್ಮನ್ನರ ಸೇವೆ ಮಾಡಬೇಕೆಂದು ವಾದಿಸುತ್ತಿದ್ದ.ಯುದ್ಧದಲ್ಲಿ ಸೆರೆಸಿಕ್ಕವರನ್ನು ಅದೆಷ್ಟು ವಿಧದಲ್ಲಿ ಚಿತ್ರಹಿಂಸೆ ಮಾಡಿದನೆಂದರೆ,ಪ್ರಪಂಚ ಹಿಟ್ಲರನ ವಿಲಕ್ಷಣ ಕ್ರೌರ್ಯಕ್ಕೆ ನಡುಗಿಹೋಯಿತು.
ಇವನ ಆಡಳಿತ ಅವಧಿಯಲ್ಲಿ ಅದೆಷ್ಟೋ ಸಾವಿರ ಅಮಾಯಕರ ಧಾರುಣ ಹತ್ಯೆಯಾಯಿತು.ಚಿತ್ರವಿಚಿತ್ರ ಹಿಂಸೆಗೆ ಗುರಿಮಾಡಿ ಕೊಳ್ಳುತ್ತಿದ್ದರಿಂದ ಸಿಕ್ಕ ಹೆಣಗಳನ್ನು ನೋಡಿದ ಜನ ಭೀತಿಯಿಂದ ತತ್ತರಿಸುತಿದ್ದರು.ಶೀಲಹರಣಕ್ಕೆ ಒಳಗಾಗಿ ಕೊಲ್ಲಲ್ಪಡುತಿದ್ದ ಹೆಣ್ಣು ಮಕ್ಕಳ ಹೆಣಗಳು ನೋಡಲು ಭಯ ಹುಟ್ಟಿಸುತ್ತಿದ್ದವು. ಮಹಾನಗರಗಳನ್ನು ನಿರಂತರವಾಗಿ-ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು.ಒಟ್ಟಿನಲ್ಲಿ ಪ್ರಪಂಚ ಜನ್ಮ ತಳೆದಾಗಿನಿಂದ ಇದುವರೆಗೆ ಹಿಟ್ಲರ್ ನಂಥ ಕ್ರೂರಿಗಳನ್ನು ಯಾರೂ ನೋಡಿಲ್ಲ.
ಸಾವಿನ ಪ್ರತಿನಿಧಿ ಸದ್ದಾಮ್!
ವಿಸ್ತಿರ್ಣದಲ್ಲಿ ನಮ್ಮ ಪಂಜಾಬ್ ರಾಜ್ಯಕ್ಕಿಂತ ಚಿಕ್ಕದಾಗಿರುವ ಇರಾಕ್ ದೇಶ ಇಡೀ ಜಗತ್ತಿಗೆ ಪರಿಚಯವಾಗಲು ಪ್ರಮುಖ ಕಾರಣ, ಅಲ್ಲಿರುವ ತೈಲ ನಿಕ್ಷೇಪಗಳು.ಪೆಟ್ರೋಲ್ ಮತ್ತು ಡಿಸೇಲ್ ಎಲ್ಲರಿಗೂ ಅತ್ಯವಶ್ಯ,ಅದಕ್ಕಾಗಿ ಎಲ್ಲ ದೇಶದವರು ನಮ್ಮ ಮುಂದೆ ಮೊಣಕಾಲೂರಿ ಕೂಡಲೇಬೇಕು ಎಂಬುದು ಸದ್ದಾಮ್ ಉದ್ದೇಶವಾಗಿತ್ತು.ಅಹಂ ಮತ್ತು ದುಡ್ಡಿನ ಮಧದಿಂದ ಕೊಬ್ಬಿ ಹೋಗಿದ್ದ ಸದ್ದಾಮ್ ಯಾರನ್ನು ಕೇರ್ ಮಾಡುತ್ತಿರಲಿಲ್ಲ.ಅಮೆರಿಕವನ್ನೇ ಎದುರು ಹಾಕಿಕೊಂಡು ನಿರಂತರವಾಗಿ ಮೂರು ತಿಂಗಳ ಅದರೊಂದಿಗೆ ಯುದ್ದಕ್ಕಿಳಿದ.
ತನಗಾಗದವರನ್ನು ಯಾವತ್ತೂ ಅವನು ಜೀವಂತ ಉಳಿಸಲಿಲ್ಲ.ಅವನ ಅಧಿಕಾರ ಅವಧಿಯಲ್ಲಿ ಸಾಮೂಹಿಕ ಹತ್ಯೆಗಳ ಸರಮಾಲೆಗಳೇ ನಡೆದು ಹೋದವು.ಯಾರ ಮೇಲಾದರೂ ಸ್ವಲ್ಪೇ ಸ್ವಲ್ಪ ಡೌಟ್ ಬಂದರೂ,ಸದ್ದಾಂ ಅಂತವರನ್ನು ಶಾಶ್ವತವಾಗಿ ಜೈಲಿಗೆ ದೂಡಿಬಿಡುತ್ತಿದ್ದ.ಈ ಅವಧಿಯಲ್ಲಿ ಲೆಕ್ಖವಿಲ್ಲದಷ್ಟು ಜನ 'ಕಣ್ಮರೆಯಾದರು'.ತನ್ನ ದೇಶದ ನಾಗರಿಕರನ್ನಷ್ಟೇ ಅಲ್ಲದೇ ಅಕ್ಕಪಕ್ಕದ ದೇಶದವರನ್ನೂ ಸದ್ದಾಮ್ ನಿರ್ಧಯವಾಗಿ ಕೊಲ್ಲಿಸುತ್ತಿದ್ದ.ಇರಾಕ್ ನ ನೆರೆ ರಾಷ್ಟ್ರವಾದ ಕರ್ಧಿಶ್ ನ ಇಪ್ಪತ್ತು ಸಾವಿರ ಜನರನ್ನು ಅತ್ಯಂತ ಅಮಾನುಷವಾಗಿ ಸದ್ದಾಮ್ ಕೊಲ್ಲಿಸಿದ.
ಕ್ರೂರತನದಲ್ಲಿ ಅಡಾಲ್ಫ್ ಹಿಟ್ಲರ್ ನ ಸೋದರನಿಂತಿದ್ದ ಸದ್ದಾಮ್ ಹುಸೇನ್ ನನ್ನು ಅಮೆರಿಕದ ಸೇನೆ ಬಂದಿಸುವ ಮೂಲಕ ಅವನ ಹೀನ ಅಧ್ಯಾಯ ಅಂತ್ಯಗೊಂಡಿತು.೨೦೦೭ ರ ಮಾರ್ಚ್ ತಿಂಗಳಲ್ಲಿ ಅಮೆರಿಕಾದಿಂದ ಮರಣ ದಂಡನೆಗೆ ಈಡಾಗಿ ಸದ್ದಾಮ್ ಕೊನೆಯುಸಿರೆಳೆದಾಗ ಭಾರತವೂ ಸೇರಿದಂತೆ ಹಲವು ರಾಷ್ಟ್ರ ಗಳಲ್ಲಿನ ಮುಸ್ಲೀಮರು ಅಮೆರಿಕದ ವಿರುದ್ದ ಪ್ರತಿಭಟನೆ ಮಾಡಿದರು.ಆದರೆ ಇರಾಕ್ ಜನ ಮಾತ್ರ ಸದ್ದಾಮ್ ಸತ್ತ ಸುದ್ದಿ ಕೇಳಿ ಸಂಬ್ರಮದಿಂದ ಕುಣಿದಾಡಿದರು!
ನಿರ್ಧಯ ಹಂತಕ ಸ್ಟಾಲಿನ್!
ಸ್ಟಾಲಿನ್ ರಷ್ಯಾದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದೇ ಇಷ್ಟು ದಿನ ನಮಗೆಲ್ಲ ಗೊತ್ತು, ಆತನೊಬ್ಬ ವೀರ - ಧೀರ,ಪ್ರಚಂಡ ಬುದ್ದಿವಂತ,ಮಹಾನ್ ರಾಜನೀತಿಜ್ಞ ಎಂದು ನಮಗೆ ಸುಳ್ಳು ಸುಳ್ಳೇ ಹೇಳಲಾಗಿದೆ.ಎಲ್ಲ ಕ್ಷೇತ್ರದಲ್ಲೂ ಏಕ್ದಂ ಬದಲಾವಣೆ ತಂದು ಬಿಡಬೇಕು ಎಂದು ಸ್ಟಾಲಿನ್ ಬಯಸಿದ್ದು ನಿಜ.ಆದರೆ ತನ್ನ ನೀತಿ ನಿಯಮಗಳನ್ನು ಯಾರಾದರು ಒಪ್ಪದಿದ್ದರೆ ಅವರನ್ನು ನಿರ್ಧಯವಾಗಿ ಜೈಲಿಗೆ ದೂಡಿಬಿಡುತ್ತಿದ್ದ ಅವನನ್ನು ಟೀಕಿಸಿದವರು ಜೈಲಿಗೆ ಹೋದರು ಎಂಬುದಷ್ಟೇ ಜನರಿಗೆ ಗೊತ್ತಾಗುತ್ತಿತ್ತು.ಮುಂದೆ ಅವರು ಎಂತಹ ಚಿತ್ರಹಿಂಸೆಗೆ ಒಳಪಡುತ್ತಿದ್ದರು,ಅದೆಂಥ ದಾರುಣ ಸಾವನ್ನು ಸಾಯುತ್ತಿದ್ದರು ಎಂಬುದು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.ತನ್ನ ವಿರುದ್ಧ ದನಿ ಎತ್ತಿದವರಿಗೆ ದೇಶಬ್ರಷ್ಟನ ಪಟ್ಟ ಕಟ್ಟುತ್ತಿದ್ದ.ಅವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ದೇಶದಿಂದಲೇ ಓಡಿಸಿಬಿದುತ್ತಿದ್ದ.ತನ್ನ ಆಡಳಿತದ ಅವಧಿಯಲ್ಲಿ ೨೦ ದಶ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅವನು ಬಲವಂತವಾಗಿ ನಾಡಿನಿಂದ ಹೊರ ದಬ್ಬಿದ ಹಾಗೂ ಅಷ್ಟೇ ಜನರ ಕೊಲೆಗಳೂ ನಡೆದುಹೋದವು.ಸುಮಾರು ಹತ್ತು ದಶ ಲಕ್ಷ ಜನರನ್ನು ಅಜೀವಪರ್ಯಂತ ಕಾರಾಗ್ರಹದಲ್ಲಿ ಇಡಲಾಗಿತ್ತು.ಅಂದರೆ ಸ್ಟಾಲಿನ್ ಸುಮಾರು ಮೂವತ್ತು ದಶ ಲಕ್ಷ ಮರ್ಡರ್ ಮಾಡಿಸಿದ.ಇಂತವನನ್ನು ನಮ್ಮ ಇತಿಹಾಸಕಾರರು ಉಕ್ಕಿನ ಮನುಷ್ಯ,ಕ್ರಾಂತಿಯ ಹರಿಕಾರ ಎಂದಷ್ಟೇ ಹೇಳಿ ನಮ್ಮ ದಾರಿ ತಪ್ಪಿಸಿಬಿಟ್ಟರು,ಅಲ್ವಾ?

No comments:

Post a Comment