Sunday, May 31, 2009

ನಮ್ಮ ಪ್ರಧಾನಿಗಳು


ಜವಾಹರಲಾಲ್ ನೆಹರೂ
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಅಧಿಕಾರ ಸ್ವೀಕರಿಸಿದರು.
ಅವಧಿ,ಆಗಷ್ಟ್ ೧೫,೧೯೪೭ ರಿಂ ಮೇ ೨೭,೧೯೬೪ ರವರೆಗೆ.

ಗುಲ್ಜಾರಿ ಲಾಲ್ ನಂದಾ
ನೆಹರೂ ನಿಧನಾನಂತರ ಮೇ ೨೭,೧೯೬೪ ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.ಅವಧಿ ಜೂನ್ ೯,೧೯೬೪ ರವರೆಗೆ.ನಂತರ ಲಾಲ್ ಬಹದ್ಧೂರ್ ಶಾಸ್ತ್ರೀ ಅವರು ನಿಧನರಾದ ಸಂದರ್ಭ ೧೯೬೬ ರ ಜನೆವರಿ ೧೧ ರಿಂದ ೨೪ ರವರೆಗೆ ಮತ್ತೆ ೧೪ ದಿನಗಳ ಕಾಲ ಪ್ರಧಾನಿಯಾಗಿದ್ದರು.

ಲಾಲ್ ಬಹದ್ಧೂರ್ ಶಾಸ್ತ್ರೀ
೧೯೬೪ ರ ಜೂನ್ ೯ ರಿಂದ ೧೯೬೬ ರ ಜನೆವರಿ ೧೧ ರವರೆಗೆ ಪ್ರಧಾನಿಯಾಗಿ ಆಳ್ವಿಕೆ ನಡೆಸಿದರು.

ಇಂದಿರಾ ಗಾಂಧೀ
ಜನೆವರಿ ೨೪, ೧೯೬೬ ರಿಂದ ಮಾರ್ಚ್ ೨೪,೧೯೭೭ ರವರೆಗೆ ಮತ್ತು ಜನೆವರಿ ೧೪ ರಿಂದ ಅಕ್ಟೋಬರ್ ೩೧, ೧೯೮೪ ರವರೆಗೆ ಒಟ್ಟು ೫೮೩೧ ದಿನಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ.

ಮೊರಾರ್ಜಿ ದೇಸಾಯಿ
ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯಾದ ದೇಸಾಯಿಯವರು ತಮ್ಮ ಜನತಾ ಪಕ್ಷ ಸರ್ಕಾರವನ್ನು ಮಾರ್ಚ್ ೨೪, ೧೯೭೭ ರಿಂದ ಜುಲೈ ೨೮, ೧೯೭೯ ರವರೆಗೆ ಮುನ್ನಡೆಸಿದರು.

ಚೌಧರಿ ಚರಣ್ ಸಿಂಗ್
ರೈತನಾಯಕ ಚರಣ ಸಿಂಗ್ ಜುಲೈ ೨೮, ೧೯೭೯ ರಂದು ಅಧಿಕಾರ ಸ್ವೀಕರಿಸಿದರು.ಜನೆವರಿ ೧೪, ೧೯೮೦ ರವರೆಗೆ ೧೭೧ ದಿನಗಳ ಕಾಲ ರಾಜೀವ್ ರಾಜೀವ್.

ರಾಜೀವ್ ಗಾಂಧೀ
ನೆಹರೂ ಮೊಮ್ಮಗ ರಾಜೀವ್ ತಮ್ಮ ೪೧ ನೆ ವಯಸ್ಸಿನಲ್ಲಿ ಅಂದರೆ ಅಕ್ಟೋಬರ್ ೩೧, ೧೯೮೪ ರಂದು {ತಮ್ಮ ತಾಯಿ ಇಂದಿರಾ ಹತ್ಯೆಯಾದ ದಿನವೇ} ಅಧಿಕಾರ ಸ್ವೀಕರಿಸಿದರು.ಡಿಸೆಂಬರ್ ೧, ೧೯೮೯ ರವರೆಗೆ ಆಡಳಿತ ನಡೆಸಿದರು.

ವಿ.ಪಿ.ಸಿಂಗ್
ಜನತಾದಳದ ಮುಖಂಡ ವಿಶ್ವನಾಥ ಪ್ರತಾಪ್ ಸಿಂಗ್ ಡಿಸೆಂಬರ್ ೨,೧೯೮೯ ರಂದು ಪ್ರಧಾನಿಯಾದರು.ನವೆಂಬರ್ ೧೦, ೧೯೯೦ ರವರೆಗೆ ೩೪೪ ದಿನಗಳ ಕಾಲ ಮುಂದುವರೆದರು.

ಚಂದ್ರಶೇಖರ್
ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ನವೆಂಬರ್ ೧೦, ೧೯೯೦ ರಿಂದ ೨೨೪ ದಿನಗಳು,ಅಂದರೆ ಜೂನ್ ೨೧, ೧೯೯೧ ರವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದರು.


ಪಿ.ವಿ.ನರಸಿಂಹರಾವ್
ಪ್ರಧಾನಿ ಪಟ್ಟ ಅಲಂಕರಿಸಿದ ದಕ್ಷಿಣ ಭಾರತದ ಪ್ರಥಮ ವ್ಯಕ್ತಿ.ಜೂನ್ ೨೧, ೧೯೯೧ ರಿಂದ ಮೇ ೧೦, ೧೯೯೬ ರವರೆಗೆ ಸಂಪೂರ್ಣ ಐದು ವರ್ಷಗಳ ಕಾಲ ಆಳ್ವಿಕೆ.

ಅಟಲ್ ಬಿಹಾರಿ ವಾಜಪೇಯಿ
ಭವ್ಯ ಭಾರತದ ಸಮರ್ಥ ನಾಯಕ ಅಟಲ್ ಬಿಹಾರಿ ವಾಜಪೇಯಿ ಮೇ ೧೬ ರಿಂದ ಜೂನ್ ೧,೧೯೯೬ ರವರೆಗೆ ಹಾಗೂ ನಂತರ ಎರಡನೇ ಬಾರಿಗೆ ಮಾರ್ಚ್ ೧೯, ೧೯೯೮ ರಂದು ಹಾಗೂ ಮೂರನೇ ಬಾರಿಗೆ ಅಕ್ಟೋಬರ್ ೧೩, ೧೯೯೯ ರಂದು ಅಧಿಕಾರ ಸ್ವೀಕಾರ.ಮೇ ೧೩, ೨೦೦೪ ರವರೆಗೆ ಪ್ರಧಾನಿಯಾಗಿ ಭಾರತವನ್ನು ಆಳಿದರು.

ಹೆಚ್.ಡಿ.ದೇವೇಗೌಡ
೧೧ ನೆ ಲೋಕಸಭೆಯ ನಾಯಕನಾಗಿ ಹರದನಹಳ್ಳಿ ದೊಡ್ದೆಗೌಡರ ಮಗ ದೇವೇಗೌಡ ಜೂನ್ ೧, ೧೯೯೬ ರಿಂದ ಎಪ್ರೀಲ್ ೨೧, ೧೯೯೭ ರವರೆಗೆ ಒಟ್ಟು ೧೧ ತಿಂಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ ನಡೆಸಿದರು.ಭಾರತವನ್ನು ಆಳಿದ ಕರ್ನಾಟಕದ ಪ್ರಥಮ ವ್ಯಕ್ತಿ ದೇವೇಗೌಡ.ಆದರೂ ಕರ್ನಾಟಕಕ್ಕೆ ನಯ್ಯಾಪೈಸೆ ಸಹಾಯ ಮಾಡಲಿಲ್ಲ ಎಂಬುದು ಬೇರೆ ಮಾತು.

.ಕೆ.ಗುಜ್ರಾಲ್
ಎಪ್ರಿಲ್ ೨೧, ೧೯೯೭ ರಂದು ಪ್ರಧಾನಿಯಾಗಿ ಗುಜ್ರಾಲ್ ಅಧಿಕಾರ ಸ್ವೀಕಾರ.ನವೆಂಬರ್ ೨೮, ೧೯೯೭ ರಲ್ಲಿ ಪ್ರಧಾನಿ ಪದವಿಗೆ ರಾಜಿನಾಮೆ.

ಡಾ.ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ ಮೇ ೨೨,೨೦೦೪ ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಐದು ವರ್ಷ ಪೂರೈಸಿ ಈಗ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಮುಂದುವರೆದಿದ್ದಾರೆ.

Tuesday, May 19, 2009

ರಕ್ತದಾಟ!


ಕ್ರಾಸ್ ದಿ ಲೈನ್ !
ಇದು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಅತ್ಯಂತ ಹೇಯ ಕಾರ್ಯಕ್ರಮಗಳಲ್ಲಿ ಒಂದು. ಡಬ್ಲ್ಯೂ.ಡಬ್ಲ್ಯೂ.ಎಫ್ ಇನ್ನೊಂದು ರೂಪ ಡಬ್ಲ್ಯೂ.ಡಬ್ಲ್ಯೂ.. ಅದರ ಪ್ರತಿರೂಪ ಟಿ.ಎನ್.. 'ಟೆನ್ ಸ್ಪೋರ್ಟ್ಸ್' - 'ಸ್ಟಾರ್ ಸ್ಪೋರ್ಟ್ಸ್' ಚಾನೆಲ್ ಗಳು ರಸ್ಟ್ಲಿಂಗ್ ಆಟದ ಹೆಸರಲ್ಲಿ ಇಂದು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು ಇಡೀ ಸಮಾಜಕ್ಕೆ ಮಾರಕವಾಗಿವೆ
ದ್ವೇಷ,ಸೇಡು,ಸಿಟ್ಟು,ಹಿಂಸೆ,ರಕ್ತ....ಇವುಗಳೇ ಇಂದು ಡಬ್ಲ್ಯೂ.ಡಬ್ಲ್ಯೂ. - ಟಿ.ಎನ್. ಬಂಡವಾಳ. ಮಾನಸಿಕವಾಗಿ ಹಾಗು ದೈಹಿಕವಾಗಿ ಮನುಷ್ಯರನ್ನು ಸದ್ರುಡವಾಗಿಸುವುದಕ್ಕೆ ಕ್ರೀಡೆ ಎನ್ನುತ್ತಾರೆ.ಆದರೆ ಸೇಡಿನ ದಾಳಿ ಮಾಡಿ ರಕ್ತ ಹರಿಸುವ ಇದ್ಯಾವ ಸೀಮೆಯ ಆಟ? ಇದರಿಂದ ಯಾರಿಗೆ ಏನು ಉಪಯೋಗವಾಗುತ್ತದೆ? ಮಕ್ಕಳು ಇದರಿಂದ ಕಲಿಯುವದಾದರು ಏನನ್ನು?
ಬೆಳಿಗ್ಗೆ ಏಳು ವರೆಗೆ,ಸಂಜೆ ನಾಲ್ಕು ವರೆಗೆ,ರಾತ್ರಿ ಒಂಭತ್ತು ವರೆಗೆ ಹೀಗೆ ದಿನದ ಮೂರೂ ಹೊತ್ತು ಅಲ್ಲದೆ,ಮದ್ಯ ಮದ್ಯ ಬಿಡುವು ಸಿಕ್ಕಾಗಲೆಲ್ಲ ರಕ್ತದಾಟವನ್ನು ಪ್ರಸಾರ ಮಾಡಲು ಇವೆರಡು ಛಾನಲ್ಗಳು ಪೈಪೋಟಿಗೆ ಇಳಿದಿವೆ,ರಸ್ಟ್ಲಿಂಗ ಕ್ರೀಡೆಯ ಹೆಸರಲ್ಲಿ ಬಕೆಟ್ ಗಟ್ಟಲೆ ರಕ್ತ ಹರಿಸುತ್ತವೆ.ರಕ್ತ ಹೆಚ್ಚು ಹರಿಸಿದಷ್ಟು ಟಿ.ಆರ್.ಪಿ.ಹೆಚ್ಚುತ್ತದೆ ಎಂಬುದು ಚಾನಲ್ ಗಳಿಗೆ ಕನ್ಫಾರ್ಮ್ ಆಗಿ ಬಿಟ್ಟಿದೆ. ಕಾರ್ಯಕ್ರಮಗಳನ್ನು ಮಕ್ಕಳಲ್ಲ,ದೊಡ್ಡವರು ನೋಡಿದರೂ ಮೂರ್ಛೆ ಹೋಗುವಂತಿರುತ್ತದೆ. ಮಹಿಳಾ ರಸ್ತ್ಲರ್ ಗಳನ್ನಂತೂ ನೋಡಲೇನೆ ಅಸಹ್ಯ ವಾಗುತ್ತದೆ. ಮೇಲೆ ಕೆಳಗೆ ನಾಲ್ಕು-ನಾಲ್ಕು ಇಂಚಿನ ಬಟ್ಟೆ ಬಿಟ್ಟರೆ ಇವರ ಮೈಮೇಲೆ ಮತ್ತೇನು ಇರುವುದಿಲ್ಲ. ಸಾಲದ್ದಕ್ಕೆ, 'ಹಿಂದೆ' ಹಾಗು ಎದೆಯ ಮೇಲೆ ಬಡಿದುಕೊಂಡು ಅಸಹ್ಯಕರ ಸಂಜ್ಞೆಗಳನ್ನೂ ಮಾಡುತ್ತಾರೆ. ಸಿನೆಮಾಗಳಲ್ಲಿ ಸುಳ್ಳು ಸುಳ್ಳೇ ರಕ್ತ ಹರಿಸಿದರೆ,ಹಿಂಸೆ ಜಾಸ್ತಿ ತೋರಿಸಿದರೆ,ಆಶ್ಲೀಲ ಅನಿಸುವಂತಿದ್ದರೆ 'A' ಸರ್ಟಿಫಿಕೆಟ್ ಕೊಡುತ್ತಾರೆ, ಅದಕ್ಕೊಂದು ಸೆನ್ಸಾರ್ ಮಂಡಳಿಯು ಇದೆ.ಆದರೆ ರಸ್ಟ್ಲಿಂಗ್ ಹಿಂಸೆಗೆ - ಅಸ್ಲೀಲಕ್ಕೆ ಕಡಿವಾಣ ಹಾಕುವವರು ಯಾರು?
ನಾವು,ನಮ್ಮ ಮಕ್ಕಳನ್ನು ಇಂಥ ಕಾರ್ಯಕ್ರಮಗಳನ್ನು ನೋಡದಂತೆ ತಡಿಯಬಹುದು.ಆದರೆ ಈಗಾಗಲೇ ಇದಕ್ಕೆ ಕೋಟ್ಯಾಂತರ ಮಕ್ಕಳು ಅಡಿಕ್ಟ್ ಆಗಿವೆ.ಮನೆಯಲ್ಲಿ ಬೇಡವೆಂದರೆ ಸ್ನೇಹಿತರ ಮನೆಗೆ ಹೋಗಿ ನೋಡುವಷ್ಟು ಅವು ಹಿಂಸೆ ಆಟಕ್ಕೆ ಅಂಟಿಕೊಂಡು ಬಿಟ್ಟಿವೆ. ಜಾನ್ ಸೇನಾ,ಬಟಿಸ್ಟಾ,ಅಂಡರ್ಟೇಕರ್,ಟ್ರಿಪಲ್ ಹೆಚ್,ಜೆಪ್ ಹಾರ್ಡಿ,ರೀಮಿಸ್ಟೀರಿಯೋ....ಮುಂತಾದ ರಸ್ತ್ಲರ್ ಗಳು ಇಂದು ನಮ್ಮ ಮಕ್ಕಳ ಹಿರೋಗಳಾಗಿದ್ದಾರೆ.ಮುಂದೆ ಇವರೇ ಆದರ್ಶವಾಗಿಬಿಟ್ಟರೆ ಬಿಟ್ಟರೆ ಹೇಗೆ?
ಟೆನ್ ಸ್ಪೋರ್ಟ್ಸ್ ಡಬ್ಲ್ಯೂ.ಡಬ್ಲ್ಯೂ., ಹಾಗೂ ಸ್ಟಾರ್ ಸ್ಪೋರ್ಟ್ಸ್ ಟಿ.ಏನ್.. ಇವೆರಡು ಕಾರ್ಯಕ್ರಮಗಳಲ್ಲಿ ಎರಡು ವಿಭಾಗಗಳಿರುತ್ತವೆ,ಒಂದು ಕೆಟ್ಟವರದು, ಇನ್ನೊಂದು ಒಳ್ಳೆಯವರದು. ಒಳ್ಳೆಯವರು ನ್ಯಾಯವಾಗಿ ಪಂದ್ಯ ಗೆಲ್ಲಲು ನೋಡಿದರೆ,ಕೆಟ್ಟವರು ಅನ್ಯಾಯದಿಂದ ,ಮೋಸದಿಂದ ಗೆಲ್ಲಲು ಪ್ರಯತ್ನಿಸುತ್ತಾರೆ. ಕೈಗೆ ಸಿಕ್ಕ ವಸ್ತುವಿನಿಂದ ಹೊಡೆದು ವೈರಿಯನ್ನು ಕೆಡವುತ್ತಾರೆ.ಕಬ್ಬಿಣದ ರಾಡು,ಚೈನು,ಛೇರು,ಸ್ಟಿಕ್,ಟೇಬಲ್,ಬ್ಯಾರಲ್,ಮೈಕ್,ಚಿಕ್ಕ ಟಿ.ವಿ, ಸುತ್ತಿಗೆ ,ಮುಳ್ಳಿನ ತಂತಿ ಸುತ್ತಿದ ಲಾಠಿ ,ಗಾಜಿನ ಚೂರುಗಳು, ಚಪ್ಪಲಿಗೆ ಬಡಿಯುವ ಚಿಕ್ಕ ಮೊಳೆಗಳು,ಬಿಯರ್ ಬಾಟಲ್....ಹೀಗೆ ಹರಿತವಾದ -ಗಟ್ಟಿಯಾದ ವಸ್ತುಗಳಿಂದ ಹೊಡೆದು ಎದುರಾಳಿಯನ್ನು ರಕ್ತಸಿಕ್ತ ಗೊಳಿಸುತ್ತಾರೆ. ಇದನ್ನು ನೋಡುವ ಮಕ್ಕಳು ಕುಳಿತಲ್ಲೇ ಕೇಕೇ ಹಾಕಿ ಕೈ ಕೈ ಹಿಸುಕಿ ಕೊಳ್ಳುತ್ತಾರೆ. ಮಕ್ಕಳು ನಾಳೆ ತಮ್ಮ ಸಹಪಾಠಿ ಜೊತೆ ಜಗಳ ತಗೆದು ಹೀಗೆ ಕೈಗೆ ಸಿಕ್ಕ ವಸ್ತುವಿನಿಂದ ಹೊಡೆಯುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ?

W.W.E ಸೂಪರ್ ಸ್ಟಾರ್ಸ್

Monday, May 11, 2009

ಕಣ್ಣು ಯಾಕೆ ಕತ್ತಲೆಯಲ್ಲಿ ಕಾಣ್ಸಲ್ಲ?


ಪ್ರಕಾಶಮಾನವಾದ ಬೆಳಕಿನಿಂದ ಒಮ್ಮೆಲೇ ಕತ್ತಲೆ ಇದ್ದಾಗ ಹೋದಾಗ ನಮಗೆ ಸರಿಯಾಗಿ ಕಣ್ಣು ಕಾಣಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.ಸಿನೆಮಾ ಟಾಕೀಸ್ ಒಳಗೆ ಹೋದಾಗ ನಿಮಗೆ ಈ ಅನುಭವ ಆಗುತ್ತದೆ, ಯಾಕೆ ಗೊತ್ತಾ?
ಎಂತಹ ಬೆಳಕಿನಲ್ಲೂ ನಮಗೆ ನೋಡಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಕಣ್ಣಿನಲ್ಲಿರುವ ಮೂರು ಮುಖ್ಯ ಅಂಗಗಳು...
*Pupil: ಇದು ಲೈಟಿನ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗುತ್ತದೆ ಮತ್ತು ಕುಗ್ಗುತ್ತದೆ.
*Ratina ದಲ್ಲಿ ಇರುವ rod ಮತ್ತು cone: cone ಪ್ರಕಾಶಮಾನವಾದ ಬೆಳಕಲ್ಲಿ ಬಣ್ಣವನ್ನು ಗ್ರಹಿಸುತ್ತದೆ.ಆದರೆ rod ಕಡಿಮೆ ಬೆಳಕಲ್ಲಿ ಕಪ್ಪು ಬಿಳುಪು ಛಾಯೆಗಳನ್ನು ಗ್ರಹಿಸುತ್ತದೆ.
*Rhodopsin: rod ಗಳಲ್ಲಿ ಕಾಣಿಸುವ ರಾಸಾಯನಿಕ ಇದು.ಕತ್ತಲೆಯಲ್ಲಿ ಕಣ್ಣು ಕಾಣಿಸಲು ಇದು ಬಹಳ ಮುಖ್ಯ. rhodopsin ಕಣಗಳು ಬೆಳಕಿನ ಕಿರಣಗಳನ್ನು ಹೀರಿಕೊಂಡಾಗ ಅವು ಒಡೆದು Retinal ಮತ್ತು Opsin ಕಣಗಲಾಗುತ್ತವೆ. ಈ ಕ್ರಿಯೆ ನಡೆಯುವುದು ನಾವು ಬೆಳಕಿನಲ್ಲಿದ್ದಾಗ,ಇದ್ದಕ್ಕಿದ್ದಂತೆ ನಾವು ಕತ್ತಲೆಗೆ ಹೋದರೆ ನಮಗೆ ಏನೂ ಕಾಣಿಸುವುದಿಲ್ಲ.ಏಕೆಂದರೆ ಕತ್ತಲೆಯಲ್ಲಿ ಕೆಲಸ ಮಾಡುವುದು Rhodospin,ಆದರೆ ಅದರ ಕಣಗಳು ಸ್ವಲ್ಪ ಮೊದಲು ನಾವು ಬೆಳಕಿನಲ್ಲಿ ಇದ್ದ ಕಾರಣ ಒಡೆದು ಬಿಟ್ಟಿರುತ್ತವೆ. ಕಣಗಳು ಒಡೆದ ಕಾರಣ Rhodospin ಸಹ ಅನುಪಯೋಗಕಾರಿ ಆಗಿದೆ.ಆದ್ದರಿಂದ ನಮಗೆ ಏನೂ ಕಾಣಿಸುವುದಿಲ್ಲ.
ಕೆಲವು ನಿಮಿಷಗಳ ನಂತರ ಒಡೆದು ಹೋದ ಕಣಗಳು ನಿಧಾನವಾಗಿ ಮತ್ತೆ ಒಂದಾಗುತ್ತವೆ,ಆಗ ನಮಗೆ ಮತ್ತೆ ಎಲ್ಲವೂ ಕಾಣಿಸುತ್ತದೆ,ಕತ್ತಲೆಯಲ್ಲೂ ಸಹ.

ಕತ್ತರಿಸಿದಷ್ಟೂ ಬೆಳೆಯುವ ಉಗುರು!


ಉಗುರು,ಕೂದಲು ಮತ್ತು ಚರ್ಮ ಇವು ಮೂರೂ ಒಂದೇ ಜಾತಿಯವು.ಇವೆಲ್ಲವೂ ರಚನೆ ಆದದ್ದು "Keratin" ಅನ್ನುವ ಕಣದಿಂದ ಬಹುಶಃ ಅದಕ್ಕೆ ಇರಬೇಕು,ಇವೆಲ್ಲವೂ ಒಂದೇ ರೀತಿ ಕೆಲಸ ಮಾಡುತ್ತವೆ;ನಿರಂತರ ಬೆಳೆಯುತ್ತವೆ ಮತ್ತು ದೇಹದಿಂದ ದೂರವಾಗುತ್ತಲೇ ಇರುತ್ತವೆ.
ಉಗುರಿನ ಬಗ್ಗೆ ಇತರ ವಿವರಗಳನ್ನು ತಿಳಿದುಕೊಳ್ಳುವದು ಸಹ ಕೂತೂಹಲಕಾರಿಯೇ, ನಾವು ಬರಿಗಣ್ಣಿನಲ್ಲಿ ನೋಡಿದಾಗ ನಮ್ಮ ಉಗುರು ಮತ್ತು ಚರ್ಮ ಜೊತೆ ಸೇರುವ U ಆಕಾರದ ಜಾಗ ಉಗುರಿನ ಬುಡ ಅನಿಸುತ್ತದಲ್ಲವೇ ಅಲ್ಲಿಂದಲೇ ಉಗುರು ಬೆಳೆಯುತ್ತದೆ ಎಂದು ಅಂದುಕೊಂಡಿರುತ್ತೇವೆ,ಆದರೆ ನಿಜವಾದ ವಿಷಯ ಅದಲ್ಲ:ಉಗುರಿನ ಬುಡ ಇರುವದು ಇನ್ನು ಒಳಗೆ ಉಗುರು ಮತ್ತು ಚರ್ಮ ಜೊತೆ ಸೇರುವ ಜಾಗವನ್ನು Curticle ಎನ್ನುತ್ತಾರೆ. Curticle ಒಳಗೆ ಉಗುರಿನ ಬುಡ ಇದೆ ಮತ್ತು ಅದು ಬರಿಗಣ್ಣಿಗೆ ಕಾಣಿಸುವದಿಲ್ಲ ಮತ್ತು ಉಗುರು ಬೆಳೆಯಲು ಪ್ರಾರಂಭವಾಗುವದು ಅಲ್ಲಿಂದಲೇ.
ಉಗುರಿನ ಬುಡದಲ್ಲಿ ಹೊಸ ಉಗುರಿನ ಕಣಗಳು ರಚನೆ ಆದಾಗ ಅದು ಹಳೆಯ ಉಗುರನ್ನು ಮೇಲು ಮುಖಕ್ಕೆ ನೂಕುತ್ತದೆ,ಮೇಲೆ ನೂಕಲ್ಪಟ್ಟ ಉಗುರಿನ ಕಣಗಳು ಸಪಾಟಾಗುತ್ತವೆ ಮತ್ತು ಗಟ್ಟಿಯಾಗುತ್ತದೆ.ಗಟ್ಟಿಯಾದ ಉಗುರು ನಿಧಾನವಾಗಿ ಹೊರ ಮುಖಕ್ಕೆ ಬರುತ್ತವೆ. ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ.ಹೊಸ ಉಗುರಿನ ಕಣ ರಚನೆಯಾದಂತೆಲ್ಲ ಹಳೆಯ ಉಗುರಿನ ಕಣ ಮೇಲು ಮೇಲಕ್ಕೆ ನೂಕಲ್ಪಡುತ್ತಲೇ ಇರುತ್ತದೆ.ಉಗುರು ಯಾವಾಗಲೂ ಬೆಳೆಯುತ್ತಲೇ ಇರುವದು ಅದೇ ಕಾರಣಕ್ಕೆ.ಉಗುರಿನಲ್ಲಿ ರಕ್ತ ಕಣಗಳು ಇರುವುದಿಲ್ಲವಾದ್ದರಿಂದ ನಾವು ಉಗುರು ಕತ್ತರಿಸಿದಾಗ ನೋವು ಆಗುವುದಿಲ್ಲ.ಕತ್ತರಿಸಿದಷ್ಟು ಉಗುರು ಬೆಳೆಯುತ್ತಲೇ ಇರುತ್ತದೆ.ಹೀಗೆ ತಿಂಗಳಿಗೆ 2.5 ಮಿಲಿ ಮೀಟರಿನಷ್ಟು ಉಗುರು ಬೆಳೆಯುತ್ತದೆ.ಅಂದರೆ ಸುಮಾರು 5-6 ತಿಂಗಳಿಗೆ ಉಗುರು ಸಂಪೂರ್ಣವಾಗಿ ಬದಲಾಗುತ್ತದೆ.
ಹೊಸ ಉಗುರಿನ ಕಣಗಳು ಉಗುರಿನ ಬುಡದಲ್ಲಿ ನಿರಂತರವಾಗಿ ಉತ್ಪಾದನೆ ಆಗುತ್ತಲೇ ಇರುವದರಿಂದ ನಾವು ಕಟ್ ಮಾಡಿದರೂ ಉಗುರು ಖಾಲಿ ಆಗುವುದೇ ಇಲ್ಲ!

ಬಿಲ್ ಗೆಟ್ಸೂ...ಮತ್ತವನ ದುಡ್ಡೂ...!


ಸಧ್ಯ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿರುವ,ಕಳೆದ ವರ್ಷ ಜಗತ್ತಿನ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದ ಬಿಲ್ ಗೇಟ್ಸ್ ನಿಮಗೆ ಗೊತ್ತಲ್ಲ?
ಆತನ ಪ್ರತಿ ಸೆಕೆಂಡಿನ ದುಡಿಮೆ 250 U.S ಡಾಲರ್ಸ್ {ಅಂದಾಜು ಹನ್ನೆರಡೂವರೆ ಸಾವಿರ},ಅಂದರೆ ಒಂದು ದಿನಕ್ಕೆ 20 ಮಿಲಿಯನ್ ಡಾಲರ.ವರ್ಷಕ್ಕೆ 7.8 ಬಿಲಿಯನ್ ಡಾಲರ!
ಇಂಥ ಬಿಲ್ ಗೇಟ್ಸ್ ದುಡ್ಡು ಎಣಿಸುವಾಗಲೋ,ಜೇಬಿನಿಂದ ದುಡ್ಡು ತಗೆಯುವಾಗಲೋ ಕೈತಪ್ಪಿ ಸಾವಿರ ಡಾಲರ್ ನೋಟೊಂದು ಕೆಳಗೆ ಬಿತ್ತು ಎಂದುಕೊಳ್ಳಿ, ಆಗ ಗೇಟ್ಸ್ ಬಗ್ಗಿ ಅದನ್ನು ತಗೆದುಕೊಳ್ಳುವುದಿಲ್ಲ. ಏಕೆಂದರೆ , ಹಾಗೆ ಬಗ್ಗಿ ತಗೆದುಕೊಳ್ಳಲು ಕನಿಷ್ಠ ನಾಲ್ಕು ಸೆಕೆಂಡ್ ನಷ್ಟಾದರೂ ಸಮಯ ಬೇಕು. ನಾಲ್ಕು ಸೆಕೆಂಡಿನಲ್ಲಿ ಆತ ಅದನ್ನು ದುಡಿದುಕೊಂಡಿರುತ್ತಾನೆ!
ಅಮೇರಿಕಾ ದೇಶದ ಮೇಲೆ ಅಂದಾಜು 6 ಟ್ರಿಲಿಯನ್ ಸಾಲ ಇದೆ. ಒಂದು ವೇಳೆ ಒಬಾಮಾ ಸಾಲವನ್ನು ನೀನೆ ತೀರಿಸು ಎಂದು ಗೇಟ್ಸ್ ಗೆ ಹೇಳಿದರೆ - ಆತ ಒಪ್ಪಿಕೊಂಡರೆ ; ಹತ್ತೇ ವರ್ಷದಲ್ಲಿ ಇಡೀ ದೇಶದ ಸಾಲವನ್ನು ಒಬ್ಬನೇ ತೀರಿಸಿಬಿಡುತ್ತಾನೆ!
ಬಿಲ್ ಗೇಟ್ಸ್ ಬಳಿ ಇರುವ ದುಡ್ಡಿನ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಭೂಮಿ ಮೇಲೆ ಬದುಕಿರುವ ಪ್ರತಿ ಮನುಷ್ಯನಿಗೂ ತಲಾ 15 ಡಾಲರ್ ದಾನ ಮಾಡಿದರೂ ಆತನಲ್ಲಿ ಇನ್ನೂ 5 ಮಿಲಿಯನ್ ಡಾಲರ್ ಉಳಿಯುತ್ತದೆ!
ಗೇಟ್ಸ್ ಒಬ್ಬ ವ್ಯಕ್ತಿಯಾಗಿರದೇ ಒಂದು ದೇಶವಾಗಿದ್ದರೆ: ದೇಶವನ್ನು ಸದ್ಯ ಭೂಖಂಡದಲ್ಲಿರುವ ಅಷ್ಟೂ ದೇಶಗಳಿಗೆ ಹೋಲಿಸಿದರೆ 37 ನೆ ಅತ್ಯಂತ ಶ್ರೀಮಂತ ದೇಶವಾಗಿರುತ್ತಿತ್ತು! ಹಾಗೆಯೇ ಗೇಟ್ಸ್ ಬಳಿಯಿರುವ ಅಷ್ಟೂ ದುಡ್ಡನ್ನು ಚಿಲ್ಲರೆ ಮಾಡಿಸಿ ಡಾಲರ್ ನೋಟುಗಳನ್ನಾಗಿಸಿದರೆ, ಭೂಮಿಯಿಂದ ಚಂದ್ರನಿಗೆ 14 ಸಲ ಹೋಗಿ ಬರುವಷ್ಟು ಉದ್ದದ ರಸ್ತೆಗೆ ನೋಟುಗಳನ್ನು ಹೊಂದಿಸಬಹುದಾಗಿದೆ!

V ಅಂದ್ರೆ VICTORY !

ಈಗ ದಿನನಿತ್ಯ ಟೀವಿ,ಪೇಪರ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೀಗೆ ಬೆರಳು ತೋರಿಸುವುದನ್ನು ನೀವು ನೋಡಿರಬಹುದು.ವಿಜಯದ ಸಿಂಬಲ್ ಯಾವುದು? 'V' ಆಕಾರದಲ್ಲಿ ಬೆರಳು ಮಾಡಿ ತೋರಿಸುವುದು ಎಂದು ನಮಗೆಲ್ಲ ಗೊತ್ತು.ಏಕೆಂದರೆ ಗೆದ್ದವರೆಲ್ಲರೂ ತೋರಿಸೋದು 'V' ಆಕಾರವನ್ನೇ. ಆದ್ರೇ ನಂಬಿ, ಇದೇ V ಸಿಂಬಲ್ ಮೊದಮೊದಲು ಇನ್ಸಲ್ಟ್ ಸಿಂಬಲ್ ಆಗಿತ್ತು.
ಎರಡನೇ ಮಹಾಯುದ್ಧ ಆಯ್ತಲ್ಲ, ಆಗ ಬ್ರಿಟನ್ ಪ್ರಧಾನಿ ಚರ್ಚಿಲ್ ತಮ್ಮ ಪಾಳಯದ ಗೆಲುವನ್ನು ಸೂಚಿಸಲು V ಸಿಂಬಲ್ ಬಳಸಿದ್ದ. ಚರ್ಚಿಲ್ ನಿಂದಲೇ V ಸಿಂಬಲ್ ಗೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿದ್ದು.ತನ್ನ ಕಡೆಯ ಸೈನಿಕರನ್ನು ಉತ್ತೇಜಿಸಲು ಚರ್ಚಿಲ್ V ಸಿಂಬಲ್ ಬಳಸಿಕೊಂಡ.ಹಾಗೇನೇ ಅದನ್ನು ವಿರೋದಿ ಪಡೆಗಳಿಗೆ 'ಗೇಲಿ' ಮಾಡುವದಕ್ಕೂ ಬಳಸಿಕೊಂಡಿದ್ದನಂತೆ.
ಸಿಂಬಲ್ ಇದೆಯಲ್ಲ,ಇದನ್ನು ಶತಮಾನಗಳ ಹಿಂದೆಯಿಂದಲೂ INSULT,SHAMEFUL ಅನ್ನೋ ಅರ್ಥದಲ್ಲೇ ಬಳಸಿದ್ದರು. V ಅಂದರೆ ಎರಡು ಅನ್ನೋ ಅರ್ಥವೂ ಸಿಕ್ಕುತ್ತದೆ.ನಮ್ಮ ಕಡೆ ಬೆಳಿಗ್ಗೆ ಎದ್ದು V ಆಕಾರದಲ್ಲಿ ಬೆರಳು ತೋರಿಸಿದರೆ ಬಹಿರ್ದೆಶೆಗೆ ಹೋಗಿ ಬರ್ತೀನಿ ಅನ್ನುವ ಅರ್ಥ ಇರೋದು ನಿಮಗೆ ಗೊತ್ತಲ್ಲ?
VICTORY ಅನ್ನೋ ಪದ ಫ್ರೆಂಚ್ VICTOIRE ಮತ್ತು ಫ್ಲೆಮಿಶ್ VRIJBEIAL ಪದಗಳಿಂದ ಸಂಯೋಜಕವಾಗಿದ್ದು, ಗೆದ್ದಾಗೊಮ್ಮೆ ಕೈಯತ್ತಿ V ಆಕಾರದಲ್ಲಿ ಬೆರಳು ತೋರಿಸಿ ನೋಡಿ ಅದರ ಖುಷಿಯೇ ಬೇರೆ.

ಜಗತ್ತಿನ ಪರಮ ಪಾತಕಿಗಳು!

ಇಲ್ಲಿ ನಾನು ಹೇಳಬಯಸಿರುವುದು ಯಾರೋ ಅಪ್ಪಟ ಕ್ರಿಮಿನಲ್ ಗಳ ಕಥೆಯನ್ನಲ್ಲ, ನಾವು ಚಿಕ್ಕವರಿದ್ದಾಗಿನಿಂದಲೇ ನಮಗೆ ಪರಿಚಯವಾಗಿರುವ ಜಗತ್ತಿನ ಮಹಾನ್ ನಾಯಕರು,ಮೇಧಾವಿಗಳು,ಸಾಧಕರ ಬಗ್ಗೆ.ಅವರ ಇನ್ನೊಂದು ಮುಖವನ್ನು ನಮಗೆ ನಮ್ಮ ಸ್ಕೂಲಿನಲ್ಲಿ ಪರಿಚಯಿಸೇ ಇಲ್ಲ,ಅದಕ್ಕಾಗಿ ನನ್ನ ಪ್ರಯತ್ನ.

ರಾಕ್ಷಸ ರೂಪಿ ಹಿಟ್ಲರ್:
ಇಡೀ ಮಾನವ ಜನಾಂಗ ಕಂಡ ಅತ್ಯಂತ ಕ್ರೂರ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವನೇ ಅಡಾಲ್ಫ್ ಹಿಟ್ಲರ್.ಕರುಣೆ,ಮಾನವೀಯತೆ,ಅನುಕಂಪ ಇಂಥ ಪದಗಳ ಪರಿಚಯವೇ ಇಲ್ಲದ ಹಿಟ್ಲರ್,ಇಡೀ ಜಗತ್ತನ್ನೇ ತನ್ನ ನಿರ್ಧಯತೆಯಿಂದ ನಡುಗಿಸಿದವನು.
ಬರೀ ಜರ್ಮನಿಯನ್ನಷ್ಟೇ ಅಲ್ಲದೆ ಇಡೀ ಜಗತ್ತನ್ನೇ ಆಳಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದ ಹಿಟ್ಲರ್ ಪ್ರಪಂಚದ ಮಹಾಯುದ್ಧಗಳಿಗೆ ಕಾರಣನಾದನು.ಇವನು ಸರ್ವಾಧಿಕಾರಿಯಾಗಿ ಜರ್ಮನಿಯಲ್ಲಿ ಆಡಳಿತ ನಡೆಸಿದ್ದು ಕೇವಲ ಹನ್ನೆರಡು ವರ್ಷವಾದರೂ ಹನ್ನೆರಡು ದಶಕಗಳವರೆಗೆ ನೆನಪಿರುವಷ್ಟು ಕ್ರೌರ್ಯ ಎಸಗಿಬಿಟ್ಟ.
ಸಲಿಂಗಕಾಮಿಯು ಆಗಿದ್ದ ಹಿಟ್ಲರ್ ಅದೆಷ್ಟೋ ಜನರನ್ನು ತನ್ನ ವಿಕ್ರತಕ್ಕೆ ಬಳಸಿಕೊಂಡ ನಿದರ್ಶನಳು ಸಿಕ್ಕಿವೆ. ಜಗತ್ತಿನಲ್ಲಿ ಜರ್ಮನ್ನರು ಸರ್ವಶ್ರೇಷ್ಟರು,ಆಳಲು ಎಂದೇ ಹುಟ್ಟಿದವರು ಎಂದು ಬಲವಾಗಿ ಪ್ರತಿಪಾದಿಸುತಿದ್ದ ಹಿಟ್ಲರ್,ಉಳಿದವರೆಲ್ಲ ಜರ್ಮನ್ನರ ಸೇವೆ ಮಾಡಬೇಕೆಂದು ವಾದಿಸುತ್ತಿದ್ದ.ಯುದ್ಧದಲ್ಲಿ ಸೆರೆಸಿಕ್ಕವರನ್ನು ಅದೆಷ್ಟು ವಿಧದಲ್ಲಿ ಚಿತ್ರಹಿಂಸೆ ಮಾಡಿದನೆಂದರೆ,ಪ್ರಪಂಚ ಹಿಟ್ಲರನ ವಿಲಕ್ಷಣ ಕ್ರೌರ್ಯಕ್ಕೆ ನಡುಗಿಹೋಯಿತು.
ಇವನ ಆಡಳಿತ ಅವಧಿಯಲ್ಲಿ ಅದೆಷ್ಟೋ ಸಾವಿರ ಅಮಾಯಕರ ಧಾರುಣ ಹತ್ಯೆಯಾಯಿತು.ಚಿತ್ರವಿಚಿತ್ರ ಹಿಂಸೆಗೆ ಗುರಿಮಾಡಿ ಕೊಳ್ಳುತ್ತಿದ್ದರಿಂದ ಸಿಕ್ಕ ಹೆಣಗಳನ್ನು ನೋಡಿದ ಜನ ಭೀತಿಯಿಂದ ತತ್ತರಿಸುತಿದ್ದರು.ಶೀಲಹರಣಕ್ಕೆ ಒಳಗಾಗಿ ಕೊಲ್ಲಲ್ಪಡುತಿದ್ದ ಹೆಣ್ಣು ಮಕ್ಕಳ ಹೆಣಗಳು ನೋಡಲು ಭಯ ಹುಟ್ಟಿಸುತ್ತಿದ್ದವು. ಮಹಾನಗರಗಳನ್ನು ನಿರಂತರವಾಗಿ-ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು.ಒಟ್ಟಿನಲ್ಲಿ ಪ್ರಪಂಚ ಜನ್ಮ ತಳೆದಾಗಿನಿಂದ ಇದುವರೆಗೆ ಹಿಟ್ಲರ್ ನಂಥ ಕ್ರೂರಿಗಳನ್ನು ಯಾರೂ ನೋಡಿಲ್ಲ.
ಸಾವಿನ ಪ್ರತಿನಿಧಿ ಸದ್ದಾಮ್!
ವಿಸ್ತಿರ್ಣದಲ್ಲಿ ನಮ್ಮ ಪಂಜಾಬ್ ರಾಜ್ಯಕ್ಕಿಂತ ಚಿಕ್ಕದಾಗಿರುವ ಇರಾಕ್ ದೇಶ ಇಡೀ ಜಗತ್ತಿಗೆ ಪರಿಚಯವಾಗಲು ಪ್ರಮುಖ ಕಾರಣ, ಅಲ್ಲಿರುವ ತೈಲ ನಿಕ್ಷೇಪಗಳು.ಪೆಟ್ರೋಲ್ ಮತ್ತು ಡಿಸೇಲ್ ಎಲ್ಲರಿಗೂ ಅತ್ಯವಶ್ಯ,ಅದಕ್ಕಾಗಿ ಎಲ್ಲ ದೇಶದವರು ನಮ್ಮ ಮುಂದೆ ಮೊಣಕಾಲೂರಿ ಕೂಡಲೇಬೇಕು ಎಂಬುದು ಸದ್ದಾಮ್ ಉದ್ದೇಶವಾಗಿತ್ತು.ಅಹಂ ಮತ್ತು ದುಡ್ಡಿನ ಮಧದಿಂದ ಕೊಬ್ಬಿ ಹೋಗಿದ್ದ ಸದ್ದಾಮ್ ಯಾರನ್ನು ಕೇರ್ ಮಾಡುತ್ತಿರಲಿಲ್ಲ.ಅಮೆರಿಕವನ್ನೇ ಎದುರು ಹಾಕಿಕೊಂಡು ನಿರಂತರವಾಗಿ ಮೂರು ತಿಂಗಳ ಅದರೊಂದಿಗೆ ಯುದ್ದಕ್ಕಿಳಿದ.
ತನಗಾಗದವರನ್ನು ಯಾವತ್ತೂ ಅವನು ಜೀವಂತ ಉಳಿಸಲಿಲ್ಲ.ಅವನ ಅಧಿಕಾರ ಅವಧಿಯಲ್ಲಿ ಸಾಮೂಹಿಕ ಹತ್ಯೆಗಳ ಸರಮಾಲೆಗಳೇ ನಡೆದು ಹೋದವು.ಯಾರ ಮೇಲಾದರೂ ಸ್ವಲ್ಪೇ ಸ್ವಲ್ಪ ಡೌಟ್ ಬಂದರೂ,ಸದ್ದಾಂ ಅಂತವರನ್ನು ಶಾಶ್ವತವಾಗಿ ಜೈಲಿಗೆ ದೂಡಿಬಿಡುತ್ತಿದ್ದ.ಈ ಅವಧಿಯಲ್ಲಿ ಲೆಕ್ಖವಿಲ್ಲದಷ್ಟು ಜನ 'ಕಣ್ಮರೆಯಾದರು'.ತನ್ನ ದೇಶದ ನಾಗರಿಕರನ್ನಷ್ಟೇ ಅಲ್ಲದೇ ಅಕ್ಕಪಕ್ಕದ ದೇಶದವರನ್ನೂ ಸದ್ದಾಮ್ ನಿರ್ಧಯವಾಗಿ ಕೊಲ್ಲಿಸುತ್ತಿದ್ದ.ಇರಾಕ್ ನ ನೆರೆ ರಾಷ್ಟ್ರವಾದ ಕರ್ಧಿಶ್ ನ ಇಪ್ಪತ್ತು ಸಾವಿರ ಜನರನ್ನು ಅತ್ಯಂತ ಅಮಾನುಷವಾಗಿ ಸದ್ದಾಮ್ ಕೊಲ್ಲಿಸಿದ.
ಕ್ರೂರತನದಲ್ಲಿ ಅಡಾಲ್ಫ್ ಹಿಟ್ಲರ್ ನ ಸೋದರನಿಂತಿದ್ದ ಸದ್ದಾಮ್ ಹುಸೇನ್ ನನ್ನು ಅಮೆರಿಕದ ಸೇನೆ ಬಂದಿಸುವ ಮೂಲಕ ಅವನ ಹೀನ ಅಧ್ಯಾಯ ಅಂತ್ಯಗೊಂಡಿತು.೨೦೦೭ ರ ಮಾರ್ಚ್ ತಿಂಗಳಲ್ಲಿ ಅಮೆರಿಕಾದಿಂದ ಮರಣ ದಂಡನೆಗೆ ಈಡಾಗಿ ಸದ್ದಾಮ್ ಕೊನೆಯುಸಿರೆಳೆದಾಗ ಭಾರತವೂ ಸೇರಿದಂತೆ ಹಲವು ರಾಷ್ಟ್ರ ಗಳಲ್ಲಿನ ಮುಸ್ಲೀಮರು ಅಮೆರಿಕದ ವಿರುದ್ದ ಪ್ರತಿಭಟನೆ ಮಾಡಿದರು.ಆದರೆ ಇರಾಕ್ ಜನ ಮಾತ್ರ ಸದ್ದಾಮ್ ಸತ್ತ ಸುದ್ದಿ ಕೇಳಿ ಸಂಬ್ರಮದಿಂದ ಕುಣಿದಾಡಿದರು!
ನಿರ್ಧಯ ಹಂತಕ ಸ್ಟಾಲಿನ್!
ಸ್ಟಾಲಿನ್ ರಷ್ಯಾದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದೇ ಇಷ್ಟು ದಿನ ನಮಗೆಲ್ಲ ಗೊತ್ತು, ಆತನೊಬ್ಬ ವೀರ - ಧೀರ,ಪ್ರಚಂಡ ಬುದ್ದಿವಂತ,ಮಹಾನ್ ರಾಜನೀತಿಜ್ಞ ಎಂದು ನಮಗೆ ಸುಳ್ಳು ಸುಳ್ಳೇ ಹೇಳಲಾಗಿದೆ.ಎಲ್ಲ ಕ್ಷೇತ್ರದಲ್ಲೂ ಏಕ್ದಂ ಬದಲಾವಣೆ ತಂದು ಬಿಡಬೇಕು ಎಂದು ಸ್ಟಾಲಿನ್ ಬಯಸಿದ್ದು ನಿಜ.ಆದರೆ ತನ್ನ ನೀತಿ ನಿಯಮಗಳನ್ನು ಯಾರಾದರು ಒಪ್ಪದಿದ್ದರೆ ಅವರನ್ನು ನಿರ್ಧಯವಾಗಿ ಜೈಲಿಗೆ ದೂಡಿಬಿಡುತ್ತಿದ್ದ ಅವನನ್ನು ಟೀಕಿಸಿದವರು ಜೈಲಿಗೆ ಹೋದರು ಎಂಬುದಷ್ಟೇ ಜನರಿಗೆ ಗೊತ್ತಾಗುತ್ತಿತ್ತು.ಮುಂದೆ ಅವರು ಎಂತಹ ಚಿತ್ರಹಿಂಸೆಗೆ ಒಳಪಡುತ್ತಿದ್ದರು,ಅದೆಂಥ ದಾರುಣ ಸಾವನ್ನು ಸಾಯುತ್ತಿದ್ದರು ಎಂಬುದು ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ.ತನ್ನ ವಿರುದ್ಧ ದನಿ ಎತ್ತಿದವರಿಗೆ ದೇಶಬ್ರಷ್ಟನ ಪಟ್ಟ ಕಟ್ಟುತ್ತಿದ್ದ.ಅವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ದೇಶದಿಂದಲೇ ಓಡಿಸಿಬಿದುತ್ತಿದ್ದ.ತನ್ನ ಆಡಳಿತದ ಅವಧಿಯಲ್ಲಿ ೨೦ ದಶ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅವನು ಬಲವಂತವಾಗಿ ನಾಡಿನಿಂದ ಹೊರ ದಬ್ಬಿದ ಹಾಗೂ ಅಷ್ಟೇ ಜನರ ಕೊಲೆಗಳೂ ನಡೆದುಹೋದವು.ಸುಮಾರು ಹತ್ತು ದಶ ಲಕ್ಷ ಜನರನ್ನು ಅಜೀವಪರ್ಯಂತ ಕಾರಾಗ್ರಹದಲ್ಲಿ ಇಡಲಾಗಿತ್ತು.ಅಂದರೆ ಸ್ಟಾಲಿನ್ ಸುಮಾರು ಮೂವತ್ತು ದಶ ಲಕ್ಷ ಮರ್ಡರ್ ಮಾಡಿಸಿದ.ಇಂತವನನ್ನು ನಮ್ಮ ಇತಿಹಾಸಕಾರರು ಉಕ್ಕಿನ ಮನುಷ್ಯ,ಕ್ರಾಂತಿಯ ಹರಿಕಾರ ಎಂದಷ್ಟೇ ಹೇಳಿ ನಮ್ಮ ದಾರಿ ತಪ್ಪಿಸಿಬಿಟ್ಟರು,ಅಲ್ವಾ?